ಸೃಷ್ಟಿಯ ಲೀಲೆ

ಮೂಡಣದ ಬಾಗಿಲಲಿ ತೆರೆಗಳ ಸರಿಸಿ
ಜೀವಿಗಳ ಬೆಳಗುತಿಹನು ಬಿಂಕದಲಿ
ತಾರೆಗಳು ಮಿನುಗುತಿವೆ ರಾತ್ರಿ ಚೆಲುವಿಯ ಕಂಗಳಲಿ
ರಮಿಸುತಿಹವು ನೀರವತೆ ಬೆಳ್ದಿಂಗಳ ತಂಪಿನಲಿ
ಜಗವೆಷ್ಟೊಂದು ಸುಂದರ ಈ ಸೋಲಾರಿನಲಿ

ಹಣ್ಣೆಲೆ ಉದುರಿ ಚಿಗುರೆಲೆ ಮೂಡಿರಲು
ಧರೆ ಮೈದುಂಬಿ ಹೂ ಮುಡಿದಿರಲು
ಇರುಳಿನಲಿ ಶೃಂಗಾರದಾ ಗಾಳಿ ಬೀಸುತಿರಲು
ಎಲ್ಲೆಲ್ಲೂ ನೋಡಿದರಲ್ಲಿ
ತುಂಬಿ ಹರಿಯುತಿಹುದಾನಂದವೆಲ್ಲೆಲ್ಲೂ

ಎಷ್ಟೊಂದು ಅನನ್ಯ ಸೃಷ್ಟಿಯ ಜಾಣ್ಮೆ
ಅಕ್ಕರೆಯ ಸಕ್ಕರೆಯನಿತೋ
ಈ ಬದುಕಿನ ರಂಗಿನಾಟದಲಿ
ಕರಗಿ ಹೋದವರೆಷ್ಟೋ ಕಾಲನ ಕೆನ್ನಾಲಿಗೆಯಲಿ
ಮಾನವ ಜನ್ಮದ ಗೆಲುವೆನಿತೋ ಈ ಸೃಷ್ಟಿಯಲಿ

ಮನದ ಕಣ್ತೆರೆದು ಭವದ ನಿಜವರಿತಾಗ
ಒಂದರಲಿ ಜನಿಸಿ ಲೀನವಾಗುವುದಿನ್ನೊಂದರಲಿ
ನಡುವೆ ಎಷ್ಟೊಂದು ಭಾವನೆಗಳ ಹಂದರ
ಈ ಸೃಷ್ಟಿಯ ಲೀಲೆಯೋ ಬಲು ಸುಂದರ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಟ್ಟು
Next post ಏಕಾಂತದ ಆಲಾಪ

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

cheap jordans|wholesale air max|wholesale jordans|wholesale jewelry|wholesale jerseys